ಮಂಗಳವಾರ, ಡಿಸೆಂಬರ್ 16, 2008

ಇರಾಕ್ ನಲ್ಲಿ ಬುಷ್ ಗೆ ಬೂಟಿನಿಂದ ವಿದಾಯ ಹೇಳಿದ ಕ್ಷಣಗಳ ದ್ರಿಷ್ಯಗಳನ್ನು ವೀಕ್ಷಿಸಿ...!

ಇರಾಕ್ ನ ಮೇಲೆ ಅಮೇರಿಕಾ ನಡೆಸಿದ ಯುದ್ದದಿಂದ ಮನ ನೊಂದ ಪತ್ರಕರ್ತನೊಬ್ಬ ಬುಷ್ ಗೆ ಹೀಳಿದ್ ವಿದಾಯದ ಮಾತುಗಳಿವು.........ಕೆಳಗಿನ ವಿಡಿಯೋ ಚೆಕ್ ಮಾಡಿ.



http://www.youtube.com/watch?v=NuyzA5dT5Kk&eurl=http://english.aljazeera.net/news/middleeast/2008/12/20081214201750232275.html&feature=player_embedded

ಸೋಮವಾರ, ಡಿಸೆಂಬರ್ 15, 2008

ಅಮರಿಕ ಅಧ್ಯಕ್ಷ ಬುಶ್‌ಗೆ ಬೂಟುಗಳನ್ನೆಸೆದು ವಿದಾಯ ಹೇಳಿದ ಇರಾಕಿ ಪತ್ರಕರ್ತ

"ಏ ನಾಯಿ, ಇದು ನಿನಗೆ ಬೀಳ್ಕೊಡುಗೆಯ ಮುತ್ತು. ಇದು ವಿಧವೆಯರು, ಅನಾಥರು ಹಾಗೂ ಸತ್ತವರ ಕೊಡುಗೆ "
ಬಾಗ್ದಾದ್, ಡಿ, 15 : ಜಗತ್ತಿನ ದೊಡ್ಡಣ್ಣ ಅಮೆರಿಕದ ಅಧ್ಯಕ್ಷ ಜಾರ್ಜ್ ಬುಷ್ ಅವರಿಗೆ ಇಂದು ಇರಾಕಿನಲ್ಲಿ ಮಹಾಮಂಗಳಾರತಿ ಆಗಿದೆ. ಇರಾಕಿನ ವಾರ್ತಾ ವಾಹಿನಿ ವರದಿಗಾರರೊಬ್ಬರು ಬುಷ್ ಕಡೆಗೆ ತನ್ನ ಎರಡು ಬೂಟುಗಳನ್ನು ಎಸೆದು ಅವಾಚ್ಯ ಶಬ್ದಗಳಿಂದ ನಿಂದಿಸಿ, ಅವಮಾನ ಮಾಡಿರುವ ಪ್ರಕರಣ ನಡೆದಿದೆ.
ಇರಾಕ್ ಪ್ರವಾಸದಲ್ಲಿ ಅಮೆರಿಕದ ಅಧ್ಯಕ್ಷ ಜಾರ್ಜ್ ಬುಷ್ ಹಾಗೂ ಇರಾಕ್ ಅಧ್ಯಕ್ಷ ನೌರಿ ಅಲ್ ಮಾಲಿಕಿ ಇಬ್ಬರು ಸುದ್ದಿಗೋಷ್ಠಿ ನಡೆಸುತ್ತಿದ್ದರು. ಯಥಾ ಪ್ರಕಾರ ನೂರಾರು ಮಂದಿ ಪತ್ರಕರ್ತರು ಗುಂಪು ಪತ್ರಿಕಾಗೋಷ್ಠಿ ಪಾಲ್ಗೊಂಡಿದ್ದರು. ಅಲ್ ಬಾಗ್ದಾದೀಯಾ ಎಂಬ ಸ್ಥಳೀಯ ವಾರ್ತಾ ವಾಹಿನಿ ವರದಿಗಾರ ಮುಂತೆದಾರ್ ಅಲ್ ಜೀದಿ, ಬುಷ್ ಮೇಲೆ ತನ್ನ ಎರಡು ಬೂಟುಗಳನ್ನು ಒಂದರ ಮೇಲೊಂದು ಎಸೆದು ಅರೇಬಿಕ್ ಭಾಷೆಯಲ್ಲಿ "ಏ ನಾಯಿ,
ಇದು ನಿನಗೆ ಬೀಳ್ಕೊಡುಗೆಯ ಮುತ್ತು. ಇದು ವಿಧವೆಯರು, ಅನಾಥರು ಹಾಗೂ ಸತ್ತವರ ಕೊಡುಗೆ " ಎಂದು ಅರಚಿದರು. ಚಪ್ಪಲಿಯೇಟು ಅಥವಾ ಶೂಗಳಿಂದ ಅವಮರ್ಯಾದೆ ತೋರಿಸುವುದು ಅತ್ಯಂತ ಅವಮಾನಕರ ಎಂಬುದಾಗಿ ಅರಬ್‌ ಸಂಸ್ಕೃತಿಯಲ್ಲಿ ಪರಿಗಣಿಸಲಾಗಿದೆ. 2003 ರಲ್ಲಿ ಅಮೆರಿಕದ ಸೈನಿಕರು ಸದ್ದಾಂ ಹುಸ್ಸೈನ್ ಪ್ರತಿಮೆ ಹೊಡೆದು ಉರುಳಿಸಿದಾಗ ನೆರೆದಿದ್ದ ಜನ ಪ್ರತಿಮೆಗೆ ಬೂಟು ಎಸೆದಿದ್ದರು.
ಜೈದಿಗೆ ಬೆಂಬಲ :
ಜೈದಿ ಶಿಯಾ ಮುಸ್ಲಿಂ ಆಗಿದ್ದು , ಕಳೆದ ವರ್ಷ ಶಿಯಾ ಉಗ್ರರು ಆತನನ್ನು ಅಪಹರಿಸಿದ್ದರು, ಅಲ್-ಭಾಗ್ದಾದಿಯ ಟಿವಿ ಮಧ್ಯ ಪ್ರವೇಶಿಸಿ ಆತನನ್ನು ಬಿಡುಗಡೆ ಮಾಡಿಸಿತ್ತು. ಅರಬ್ ರಾಷ್ಟ್ರಗಳು ಹಾಗು ಮಧ್ಯ ಪ್ರಾಚ್ಯದಾದ್ಯಂತ ಮುಂತಾಜಿರ್ ಅಲ್-ಜೈದಿ ಅನ್ನು ಜನ ಬೆಂಬಲಿಸಿದ್ದಾರೆ. ಅರಬ್ ಟಿವಿ ಚಾನೆಲ್ ಗಳು ಬೂಟು ಎಸೆದ ದ್ರಿಷ್ಯವನ್ನು ಪದೇ ಪದೇ ಪ್ರಸಾರ ಮಾಡುತ್ತಿದೆ. ಬುಷ್ ನೀತಿಯಿಂದ ರೋಸಿ ಹೋಗಿರುವ ಅರಬ್ ಪತ್ರಕರ್ತರು , ವಿಶ್ಲೇಷಕರು ಸಹ ಅಲ್-ಜೈದಿಯನ್ನು ಸಮರ್ಥಿಸಿದ್ದಾರೆ. ಲಂಡನ್ ಮೊಲದ ಪ್ರಭಾವಿ ಅರಬ್ ದಿನ ಪತ್ರಿಕೆಯೊಂದರ ಸಂಪಾದಕರು ಈ ಘಟನೆ ಬುಷ್ ನಂತಹ ಯುದ್ಧ ಅಪರಾಧಿಗೆ ಸರಿಯಾದ ಬೀಳ್ಕೊದುಗೆಯಾಗಿದೆ ಎಂದು ಬಣ್ಣಿಸಿದ್ದಾರೆ.
ಈ ಘಟನೆಯ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ...!

7 ಚರ್ಚ್ ಗಳಿಗೆ ಜಿಲ್ಲಾಡಳಿತದ ಬೀಗ ಮುದ್ರೆ : ಪ್ರತಿಭಟನೆ



ದಾವಣಗೆರೆ, ಡಿ.14 : ಜಿಲ್ಲಾಡಳಿತ ಸಂಘ ಪರಿವಾರದ ಮುಖವಾಣಿಯಾಗಿ ಕಾರ್ಯ ನಿರ್ವಹಿಸುತ್ತಿದೆ . ಈ ಕ್ರಮವನ್ನು ವಿರೋಧಿಸಿ ರಾಜ್ಯದಾದ್ಯಂತ ಉಗ್ರ ಸ್ವರೂಪದ ಚಳುವಳಿ ನಡೆಸಬೇಕಾಗುತ್ತದೆ ಎಂದು ಕೋಮು ಸೌಹಾರ್ಧ ವೇದಿಕೆಯ ಜಿಲ್ಲಾಧ್ಯಕ್ಷ ಹಾಗೂ ಪತ್ರಕರ್ತ ಚಂದ್ರಶೇಖರ್ ತೋರನಘಟ್ಟ ಎಚ್ಹರಿಸಿದ್ದಾರೆ.

ನಗರದಲ್ಲಿನ ಏಳು ಚರ್ಚ್ ಗಳಿಗೆ ಬೀಗ ಮುದ್ರೆ ಹಾಕಿರುವ ಚರ್ಚ್ ಗಳಿಗೆ ಜಿಲ್ಲಾಡಳಿತದ ಕ್ರಮವನ್ನು ವಿರೋಧಿಸಿ ಸೋಮವಾರ ಬೆಳಗ್ಗೆ 11 ಗಂಟೆಗೆ ವಿವಿಧ ಪ್ರಗತಿಪರ ಸಂಘಟನೆಗಳ ನೇತ್ರತ್ವದಲ್ಲಿ ಜಿಲ್ಲದಿಕಾರಿ ಕಚೇರಿ ಎದುರು ಪ್ರತಿಭಟನೆ ಎಂದು ಅವರು ತಿಳಿಸಿದ್ದಾರೆ.

ಸೆ.23 ರಂದು ದಾವಣಗೆರೆಯಲ್ಲಿ ಕ್ರೈಸ್ತ ಸಮುದಾಯದ ಪ್ರಾರ್ಥನಾ ಮಂದಿರಗಳ ಮೇಲಿನ ಸಂಘ ಪರಿವಾರದ ಗೂಂಡಾಗಳ ದಾಳಿಯನ್ನು ಖಂಡಿಸಿ ಕೋಮು ಸೌಹಾರ್ಧ ವೇದಿಕೆ ಸಮಾವೇಶ ನಡೆಸಿದ ನಂತರ ಜಿಲ್ಲಾಡಳಿತ ನಗರದ ಏಳು ಚರ್ಚ್ ಗಳಿಗೆ ಏಕಾ ಏಕಿ ಬೀಗ ಮುದ್ರೆ ಹಾಕಿದೆ . ಕ್ರೈಸ್ತ ರ ಪ್ರಾರ್ಥನೆ ಮಾಡುವ ಹಕ್ಕನ್ನು ಜಿಲ್ಲಾಡಳಿತ ಕಸಿದು ಕೊಂಡಿದೆ ಎಂದು ಚಂದ್ರಶೇಖರ್ ಆರೋಪಿಸಿದರು .

ಮಂಗಳವಾರ, ನವೆಂಬರ್ 18, 2008

ಮಾಲೆಂಗಾವ್ ಸ್ಪೋಟ ಪ್ರಕರಣ

ಆರೋಪಿಗಳಿಂದ ಪಾಸ್ ಬುಕ್ ವಶ
ನಾಸಿಕ, .15 : ಮಾಲೆಂಗಾವ್ ಸ್ಪೋಟಆರೋಪಿ ದಯಾನಂದ್ ಪಾಂಡೆಯ ಪಾಸ್ ಬುಕ್ ಒಂದು ತಮಗೆ ದೊರತಿದ್ದು , ಅದರಿಂದ ಆತನ ಹಣದ ವಹಿವಾಟು ಖಚಿತಪಡಿಸಲು ಸಹಕಾರ ದೊರೆಯಲಿದೆ ಎಂದು ಪೋಲಿಸರಿಂದು ಪ್ರತಿಪಾದಿಸಿದ್ದಾರೆ. ಮಾಲೆಂಗಾವ್ ಸ್ಪೋಟ ಹಾಗೂ ಇತರ ಹಣ ಬದಲಾವಣೆಯ ಕುರಿತು ಮಾತನಾಡುತ್ತಿದ್ದ ಪಬ್ಲಿಕ್ ಪ್ರೋಸಿಕ್ಯುತರ್ ಮಿಸಾರ್, ಅಭಿನವ್ ಭಾರತ್ ಖಜಾಂಜಿ ಅಜಯ್ ರಹಿರ್ಕರ್ , ಪಾಂಡೆಗೆ ಅಪಾರ ಮೊತ್ತದ ಹಣ ನೀಡಿದ್ದು, ಅದನ್ನು ಅರ್.ಡಿ.ಎಕ್ಸ್ ಇತರ ಸ್ಪೋಟಕ ಹಾಗೂ ಟೈಮರ್ ಖರೀದಿಗೆ ಉಪಯೋಗಿಸಲಾಗಿದೆಯೂ? ಎಂಬುದರ ತನಿಕೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ. ಆರೋಪಿಗಳಾದ ಶ್ಯಾಮಲಾಲ್ ಸಾಹು ಹಾಗೂ ಶಿವ ನಾರಾಯಣ ಸಿಂಗ್ ರಿಂದ ಎರಡು ಬಳಕೆಯಾಗದ ಟೈಮರ್ ಗಳನ್ನೂ ವಶಪಡಿಸಲಾಗಿದೆ ಎಂದು ಪೊಲೀಸರು ಪ್ರತಿಪಾದಿಸಿದ್ದಾರೆ. ಬಿಗು ಬಂದೋಬಸ್ತ್ ನಲ್ಲಿ ಪಾಂಡೆಯನ್ನು ಅಪರಾಹ್ನ 3.40 ವೇಳೆ ನ್ಯಾಯಾಲಯಕ್ಕೆ ತರಲಾಯಿತು. ಖಾದಿ ಕುರ್ತ ಹಾಗು ಲುಂಗಿ ಧರಿಸಿದ್ದ ಆತನನ್ನು ಮುಖಕ್ಕೆ ಕಪ್ಪು ಮುಸುಕು ಹಾಕಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು. ನಿರರ್ಗಳ ಹಿಂದಿಯಲ್ಲಿ ಮಾತನಾಡಿದ ಪಾಂಡೆ, ತನ್ನ ಹೆಸರು ಪಾಂಡೆಯಲ್ಲ , ಸುಧಾಕರ ದ್ವಿವೇದಿ ಎಂದು ವಾದಿಸಿದರು. ಪಾಂಡೆ , 2008 .12ರಂದು .26 ರಂದು ಫರೀದಾಬಾದ್ ನಲ್ಲಿ ನಡೆದ 'ಗುಪ್ಯ ಸಬೆಗಳಲ್ಲಿ ' ಭಾಗವಹಿಸಿದ್ದನು. ಮಲೆನ್ಗಾವ್ ಸ್ಪೋಟಕ್ಕೆ ಮೊದಲು ಪುಣೆಯಲ್ಲಿ ನಡೆದಿದ್ದ ಸಭೆಯೊಂದರಲ್ಲಿ ಹಾಜರಿದ್ದರೆಂದು ಪಬ್ಲಿಕ್ ಪ್ರೋಸಿಚುತೆರ್ ನ್ಯಾಯಾಲಯಕ್ಕೆ ತಿಳಿಸಿದ್ದಾರೆಂದು ಮಿಸಾರ್ ಹೇಳಿದರು. ಪೊಲೀಸರ ಪ್ರಕಾರದೇಶದ ಬೇರೆ ಬೇರೆ ಕಡೆ ನಡೆದ ಸಭೆಗಳಲ್ಲಿ ಮಾಲೆಂಗಾವ್ ಸ್ಪೋಟದ ಪಿತೂರಿ ಹೆಣೆಯಲಾಗಿದೆ. ಅಗಸ್ಟ್ ನಲ್ಲಿ ಲೇ|| ಶ್ರೀಕಾಂತ್ ಪುರೋಹಿತ್ ಹಾಗೂ ಪ್ರದಾನ ಆರೋಪಿ ರಾಮ್ಜಿಯ ಭೇಟಿಗೂ ಪಾಂಡೆ ವ್ಯವಸ್ಥೆ ಮಾಡಿದ್ದರೆಂದು ಅವರು ತಿಳಿಸಿದರು. ರಾಮ್ಜಿಯ ಬಂಧನ ಇನ್ನಷ್ಟೇ ಆಗ ಬೇಕಾಗಿದೆ. ರಾಮ್ಜಿಯ ಪತ್ತೆಗಾಗಿ ಪಾಂಡೆ ಗೆ ಕಸ್ತೋಡಿ ಕೇಳಲಾಗಿದೆ. ದೇಶದ ಇತರೆಡೆಗಳಲ್ಲಿ ನಡೆದ ಸ್ಪೋಟ ಗಳಲ್ಲೂ ಪಾಂಡೆಯ ಪಾತ್ರವಿದೆಯೇ ಎಂಬುದನ್ನೂ ತನಿಕೆ ನಡೆಸಬೇಕಿದೆ ಎಂದು ಮಿಸಾರ್ ತಿಳಿಸಿದರು. ಪಾಂಡೆ ಭಂದಿತೆ ಸಾದ್ವಿ ಪ್ರಜ್ಞ ಸಿಂಗ್ ತಕೂರ್ ಳೊಂದಿಗೆ ನಿಕಟ ಸಂಪರ್ಕದಲ್ಲಿದ್ದರೆನ್ದೂ ತಿಳಿಸಿದರು.


A child injured in the Malegaon blasts.

ಸೋಮವಾರ, ನವೆಂಬರ್ 17, 2008

ಸಂಜೋತಾ ಸ್ಪೋಟದಲ್ಲಿ ಪುರೋಹಿತ್

ಅರ್.ಡಿ.ಎಕ್ಸ್ ಖರೀದಿ ಬಹಿರಂಗ
.18ವರೆಗೆ ಪೋಲಿಸ್ ಕಸ್ಟಡಿ
ನಾಸಿಕ, ನ 15: ಮಲೆನ್ಗಾವ್ ಸ್ಪೋಟದ ಆರೋಪಿ ಲೇ|ಕ|ಶ್ರೀಕಾಂತ್ ಪುರೋಹಿತ್ 2006 ರಲ್ಲಿ ಜಮ್ಮು-ಕಾಶ್ಮೀರದಿಂದ 60 ಕಿ.ಗ್ರಾಂ. ಅರ್.ಡಿ.ಕ್ಸ್ ಖರೀದಿಸಿದ್ದು, ಅದರ ಒಂದು ಭಾಗವನ್ನು ಮಲೆನ್ಗವ್ ಹಾಗೂ ಸಂಜೋತಾ ಎಕ್ಸಪ್ರೆಸ್ಸ್ಪೋಟಗಳಿಗೆ ಬಳಸಿದ್ದಾರೆಂದು ಪ್ರಸಿಕುಶನ್ ಇಂದು ನ್ಯಾಯಾಲಯದಲ್ಲಿ ವಾದಿಸುವುದರೊಂದಿಗೆ, ನಡೆಯುತ್ತಿರುವ ATS ತನಿಖೆಗೆಹೊಸ ತಿರುವೊಂದನ್ನು ನೀಡಿದೆ. ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾದ ಪುರೋಹಿತರಿಗೆ ವಿಸ್ತ್ರತ ವಿಚಾರಣೆಗಾಗಿ .18 ತನಕ ಪೋಲಿಸ್ ಬಂಧನ ವಿಧಿಸಲಾಯಿತು. ತಾನು 60 ಕಿ.ಗ್ರಾಂ ಅರ್.ಡಿ.ಎಕ್ಸ್ ಅನ್ನು ಜಮ್ಮು-ಕಾಶ್ಮೀರದಿಂದ ಖರೀದಿಸಿರುವುದಾಗಿಪುರೋಹಿತ್ 2006 ರಲ್ಲಿ ಹೇಳಿಕೊಂಡಿದ್ದರೆಂದು ನ್ಯಾಲಯಕ್ಕೆ ಸಾಕ್ಷಿಯೊಬ್ಬ ಹೇಳಿಕೆ ನೀಡಿದ್ದಾನೆ. ಅದನ್ನೇ ಮಾಲೆಂಗವ್ ಹಾಗೂಸಂಜೋತಾ ಸ್ಪೋಟಗಳಿಗೆ ಬಳಸಿರುವ ಶಂಕೆಯಿದೆ. ಪುರೋಹಿತ್ ಅರ್.ಡಿ.ಎಕ್ಸ್ ಭಾಗವೊಂದನ್ನು ಭಗವಾನ್ ಎಂಬಾತನಿಗೆ ನೀಡಿದ್ದು, ಅದು ಸಂಜೋತಾ ಸ್ಪೋಟಕ್ಕೆಉಪಯೋಗವಾಗಿದೆ ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ಹೇಳಿದರು.

.ಟಿ.ಎಸ್ ಬೇಡ 'ಉಗ್ರ' ಸ್ವಾಮೀಜಿಯ ಮೊರೆ.
ನಾಸಿಕ: .ಟಿ.ಎಸ್ ಅದಿಕಾರಿಗಳು ತನಗೆ ಬಂದನದಲ್ಲಿ ಮೂರನೇ ದರ್ಜೆ ಚಿತ್ರ ಹಿಂಸೆ ನೀಡುತ್ತಿದ್ದು, ತನ್ನ ಜೀವಅಪಾಯದಲ್ಲಿದೆಯೆಂದು ಮಲೆನ್ಗವ್ ಸ್ಪೋಟದ ಬಂಧಿತ ಆರೋಪಿ ಸ್ವಾಮಿ ಅಮ್ರುಥಾನಂದ ಅಲಿಯಾಸ್ ದಯಾನಂದನ ಪಾಂಡೆಅಲಿಯಾಸ್ ಸುಧಾಕರ ದ್ವಿವೇದಿ ನಾಸಿಕದ ನಯಾಲಯವೊಂದರಲ್ಲಿ ನಿನ್ನೆ ದೂರಿದ್ದಾರೆ. "ಗುರುವಾರ ತನ್ನನ್ನು ಮುಂಬಯಿಗೆ ತಂದಬಳಿಕ ನಾನು ಸಂಖಷ್ಟದಲ್ಲಿದ್ದೇನೆ. ಪೋಲಿಸ್ರು ನನ್ನನ್ನು ಯದ್ವಾ ತದ್ವಾ ಥಳಿಸಿದ್ದರಲ್ಲದೆ ಮೂರನೇ ದರ್ಜೆಯ ಚಿತ್ರ ಹಿಂಸೆನೀಡುತ್ತಿದ್ದಾರೆ. " ಎಂದು ಅವರು ಮುಖ್ಯ ನ್ಯಾಯಾಂಗ ದಂಡಾಧಿಕಾರಿ ಎಚ್.ಕೆ ಗಂಥ್ರ ರಲ್ಲಿ ಆರೋಪಿಸಿದರು. ಬಂಧನದಲ್ಲಿ ಯಾವುದಾದರೂ ಸಮಸ್ಯೆಗಳನ್ನು ಅನುಭವಿಸುತ್ತಿರುವಿರೆ? ಅಥವಾ ಯಾವುದಾದರೂ ದೂರುಗಳಿವೆಯೇ? ಎಂಬ ನ್ಯಾಯಾಧೀಶರಪ್ರಶ್ನೆಗೆ ಹಿಂದಿಯಲ್ಲಿ ಉತ್ತರಿಸಿದ ಪಾಂಡೆ , ಯಾವಾಗ ತನ್ನ ಬಂಧನವಾಯಿತೋ ಅಂದಿನಿಂದ ನಾನು ಸಮಸ್ಯೆಯಲ್ಲಿಯೇ ಇದ್ದೇನೆ . ಬಂಧನದ ಬಳಿಕ ತಾನು ಇದುವರೆಗೆ ಏನನ್ನೂ ತಿಂದಿಲ್ಲ ಎಂದು ದೂರಿದರು . ಶರೀರದ ಮೇಲೆ ಚಿತ್ರಹಿಂಸೆಯ ಗಾಯಗಳಿವೆಯೇ? ಎಂಬ ಪ್ರಶ್ನೆಗೆ ತಡ ಬಡಾಯಿಸಿದ ಅವರು, ತನ್ನನ್ನು ಹಿಂಸಿಸಲು ಪೋಲಿಸರು ವಿಶೇಷ ಪದ್ಧತಿ ಉಪಯೋಗಿಸಿದ್ದಾರೆ. ಶರೀರದಮೇಲೆ ಯಾವುದೇ ಕಾಣುವ ಗಾಯವಿಲ್ಲ. ದಯವಿಟ್ಟು ತನ್ನನ್ನು .ಟಿ.ಎಸ್ ವಶಕ್ಕೆ ನೀಡಬೇಡಿ. ದೆರಾವುದಾದರೂ ತನಿಕೆ ಸಂಸ್ಥೆ ಗೆಒಪ್ಪಿಸಿ ಎಂದು ಅಂಗಲಾಚಿದರು. ತನ್ನ ಕೊಠಡಿಯೊಳಗೆ ಪಾಂಡೆಯನ್ನು ಪರೀಕ್ಷಿಸಿದ ನಯಾದೀಷರು ಅವರಿಗೆ .೨೬ ವರೆಗೆಪೋಲಿಸ್ ಕಸ್ಟಡಿ ವಿದಿಸಿದರು. ಸರಕಾರೀ ವಕೀಲರು ಮುಂಬೈ ಕಿಮ್ ಆಸ್ಪತ್ರೆಯ ವೈದ್ಯಕೀಯ ಹಾಗೂ ಕ್ಷಕಿರಣ ವರದಿ ಸಲ್ಲಿಸಿದ್ದು, ಅದರಲ್ಲಿ ಪಾಂಡೆ ಆರೋಗ್ಯವಾಗಿದ್ದರೆಂದು ಹೇಳಲಾಗಿದೆ.

ಅಸ್ಸಾಂ ಸ್ಪೋಟದಲ್ಲಿ ಆರೆಸ್ಸಸ್ ಕೈವಾಡ : ಉಲ್ಫಾ

ಉವಾಹತಿ, 11: ಅಕ್ಟೋಬರ್ 30 ಅಸ್ಸಾಂ ಸ್ಪೋಟ ಹಾಗೂ ಬೋಡೊ ಪ್ರಾಂತೀಯ ಆಡಳಿತ (BTAT) ಜಿಲ್ಲೆಯಲ್ಲಿ ನಡೆದ ಜನಾಂಗಿಯ ಹಿಂಸಾಚಾರದಲ್ಲಿ ಆರೆಸ್ಸೆಸ್ ಭಾಗಿಯಾಗಿದೆಯೆಂದು ನಿಷೇದಿತ ಉಲ್ಫಾ ಸಂಘಟನೆ ಆರೋಪಿಸಿದೆ. ಸ್ಪೋಟದಲ್ಲಿ 85 ಹಾಗೂ ಜನಾಂಗಿಯ ಹಿಂಸಾಚಾರದಲ್ಲಿ 55 ಮಂದಿ ಅಸುನೀಗಿದ್ದಾರೆ. ಉಲ್ಫಾ ಅದ್ಯಕ್ಷ ಅರವಿಂದ ರಾಜಕ್ಹೊವ ಹೊರಡಿಸಿರುವ -ಮೇಲ್ ಹೇಳಿಕೆಯೊಂದರಲ್ಲಿ, ಅಸ್ಸಾಂ ಸಚಿವ ಹಿಮಂಥ ಭಿಸ್ವಾ ಶರ್ಮ ಆರೆಸ್ಸೆಸ್ ಏಜೆಂಟ್ ಆಗಿದ್ದು , ಸ್ಪೋಟದಲ್ಲಿ ತನ್ನ ಒಳಗೊಲ್ಲುವಿಕೆಯನ್ನು ಮರೆಮಾಚಲು ಉಲ್ಫಾವನ್ನು ದೂರುತಿದ್ದಾರೆ. ಶರ್ಮ ಕೊಂಗ್ರೆಸ್ಸ್ ನವರಾಗಿರಲಿ ಅಥವಾ ಬಿಜೆಪಿ ಯವರಾಗಿರಲಿ ಅವರು ವಾಸ್ತವವಾಗಿ ಆರೆಸ್ಸೆಸ್ ಏಜೆಂಟ್ ರಾಗಿದ್ದಾರೆ. ಅವರ ಕೈವಾಡವನ್ನು ಮರೆಮಾಚಲು ದಾರಿ ತಾಪ್ಪಿಸುವ್ ಹೇಳಿಕೆ ನೀಡುತ್ತಿದ್ದಾರೆ ಎಂದು ಅವರು ದೂರಿದ್ದಾರೆ. ಅಸ್ಸಾಂನ ನಾಲ್ಕು ಪಟ್ಟಣಗಳಲ್ಲಿ .30 ರಂದು ನಡೆದ ಸ್ಪೋಟಗಳಲ್ಲಿ ಅರೆಸ್ಸೆಸ್ನ ಕೈವಾಡ ಇರುವ ಬಗ್ಗೆ ಉಲ್ಫಾ ಸಾಕಷ್ಟು ಪುರಾವೆಗಳನ್ನು ಹೊಂದಿದೆಯೆಂದು ರಾಜಕ್ಹೊವ ಪ್ರತಿಪಾದಿಸಿದ್ದಾರೆ. ದೇಶದ ವಿವಿಧ ಭಾಗಗಳಲ್ಲಿ ಸ್ಪೋಟ ನಡೆಸಲು ಆರೆಸ್ಸೆಸ್ ಗುಪ್ತ ಸೂಚನೆ ಕಳುಹಿಸಿದೆಯೆಂದು ಕೆಲವು ತಿಂಗಳ ಹಿಂದೆ ಉಲ್ಫಾ ತನ್ನ ಮುಕವಾಣಿ 'ಫ್ರೀಡಂ' ನಲ್ಲಿ ಹೇಳಿತ್ತು . ಆದ್ರೆ ರಾಜ್ಯ ಸರಕಾರ ಭಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಅವರು ಆರೋಪಿಸಿದ್ದಾರೆ. ಇದಲ್ಲದೇ , ಬಿಜೆಪಿ ಯೇತರ ರಾಜ್ಯಗಳಲ್ಲಿ ಇತ್ತೇಚೆಗೆ ಸಂಭವಿಸಿರುವ ಸ್ಪೋಟಗಳಲ್ಲಿ ಆರೆಸ್ಸೆಸ್ ಹಾಗೂ ಬಿಜೆಪಿ ಒಳಗೊಂಡಿರುವುದು ನಡೆದಿರುವ ಬಂಧನಗಳಿಂದ ಸಾಬೀತಾಗಿದೆಯೆಂದು ರಾಜಕ್ಹೊವ ನುಡಿದಿದ್ದಾರೆ.

With a little help: People try to pull a vehicle near a blast site in Guwahati on Thursday.(AP)

ಭಾನುವಾರ, ನವೆಂಬರ್ 16, 2008

ಲೆ!ಕರ್ನಲ್ ಪುರೋಹಿತ್ ಗೆ ಸೇನೆಯಿಂದ ನಿಷೇಧ....!

ಹೊಸದಿಲ್ಲಿ : ಮಾಲೆಂಗವ್ ಸ್ಪೋಟ ಪ್ರಕರಣದಲ್ಲಿ ATS ಬಂಧಿಸಿರುವ ಲೆ|| ಶ್ರೀಕಾಂತ್ ಪುರೋಹಿತ್ ರನ್ನು ಸೇನೆಯು 'ಶಿಸ್ತು-ನಿಗಾ ನಿಷೇಧ'ದಡಿಯಲ್ಲಿರಿಸಿದೆ. ಇದರಿಂದಾಗಿ ಅವರಿಗೆ ಭಡ್ತಿ , ಹೊಸ ಹುದ್ದೆ ಇತ್ಯಾದಿ ದೊರೆಯುವುದಿಲ್ಲ ಹಾಗೂ ಪ್ರಸ್ತಕ ಹೊಣೆಗಾರಿಕೆಯಿಂದ ಮುಕ್ತಿ ನೀಡಲಾಗಿದೆ. ವಿಚಾರಣೆಗಾಗಿ ವಶಕ್ಕೆ ತೆಗೆದುಕೊಂಡಂದಿನಿಂದ ವಿಚಾರಣೆ ಅಂತ್ಯಗೊಂಡು ವರದಿ ಸಲ್ಲಿಸುವ ವರೆಗೆ ನಿಷೇದ ಜಾರಿಯಲ್ಲಿರುತ್ತದೆ ಎಂದು ಮೂಲಗಳು ತಿಳಿಸಿದೆ. ನ್ಯಯಾಯಲವು ಆರೋಪಿಯನ್ನು ಖುಲಾಸೆಗೊಳಿಸುವವರೆಗೆ ನಿಷೇದ ಮುಂದುವರಿಯಲಿದ್ದರೂ , ಪುರೋಹಿತ್ ಸಂಬಳ ಹಾಗೂ ಅಧಿಕ್ರತ ನಿವಾಸವನ್ನು ಅದುವರೆಗೆ ಹೊಂದಿರಲು ಅರ್ಹರಾಗುತ್ತಾರೆ. ಇದೇ ವೇಳೆ ಪುರೋಹಿತ್ 'ಥಾನೆ' ಹಾಗೂ ಮುಂಬೈಗಳಲ್ಲಿ ನಾಟಕವೊಂದರ ವೆಲ್ ಸಂಭವಿಸಿರುವ ಸ್ಪೋಟಗಳ ಆರು ಮಂದಿ ಆರೋಪಿಗಳ ಸಂಭಂದದ ಕುರಿತು ATS ತನಿಕೆ ನಡೆಸುತ್ತಿದೆ.
ಥಾನೆ ಹಾಗೂ ವಾಷಿಗಳ ಸ್ಪೋಟ ಆರೋಪಿ , ಹೋಮಿಯೋಪತಿ ವೈದ್ಯ , ಹೇಮಂತ್ ಚಾಲ್ಕೆ ಎಂಬಾತನೊಂದಿಗೆ ಪುರೋಹಿತ್ ಗೆ ಸಂಬಂದವಿದೆಯೇ ಎಂಬುದನ್ನೂ ಅದು ಪರಿಶೀಲಿಸಲಿದೆ. ಹಿಂದೂ ಜಾಗೃತಿ ಸಮಿತಿ ಹಾಗೂ ಸನಥನ ಸಂಸ್ಥ ಎನ್ನುವ ಸಂಘಟನೆಗಳು ನಾಟಕ ಮಂದಿರ ಸ್ಪೋಟದಲ್ಲಿ ಒಳಗೊಂಡಿದೆ ಎನ್ನಲಾಗಿದ್ದು , ಬಂದಿತ ಆರು ಮಂದಿಯ ವಿರುದ್ದ ಆರೋಪ ಪಟ್ಟಿ ಸಲ್ಲಿಸಲಾಗಿದೆ. ಇದೇ ವೇಳೆ , ಇಂದು ಪುರೋಹಿತ್ ರನ್ನು ಬೆಂಗಳೂರು ನಲ್ಲಿ ಮಂಪರು ಪರೀಕ್ಷೆಗೆ ಒಳಪಡಿಸಲಾಗಿದೆ . ನಿವ್ರ್ತ ಮೇಜರ್ ಉಪಾದ್ಯಾಯರ ಮಂಪರು ಪರೀಕ್ಷೆ ನಿನ್ನೆ ನಡೆದಿತ್ತು.

ಭಗ್ಗೆ ನಿಮ್ಮ ಅಭಿಪ್ರಾಯಗಳನ್ನು ತಿಳಿಸಿರಿ.